Friday, May 29, 2009

ಚುನಾವಣೆ 2009

ಅಂತೂ ಇಂತೂ ಮುಗಿಯಿತು ಎಣಿಕೆ,
ಓಡದ ಕುದುರೆಯ ಕತ್ತಲಿ ಕುಣಿಕೆ.

ತಕ್ಕಡಿಯ ಕಪ್ಪೆಗಳಿಗೆ ಆಯಿತು ದಿಗ್ಭ್ರಮೆ,
ನೆಗೆಯಲು ಬಿದ್ದರು ನೀರಿಲ್ಲದೆ ಭಾವಿಗೆ.
ಆರು ದೋಸೆ, ಮೂರೂ ದೋಸೆ, ಬಯಸಿ ಬಂದವರು,
ಭವತಿ ಭಿಕ್ಷಾಂದೇಹಿ ಎನ್ನುವಂತಾಯಿತು.

ತುಂಡು ವೀರರು, ಬಂಡುಕೋರರು,
ಸುಳಿಗಾಳಿಗೆ ಸಿಕ್ಕ ತರೆಗೆಲೆಗಳಾದರು.
ರಾಣಿಜೇನುಗಳು ಪರಿತಪಿಸಿದರು,
'ಜೀ ಹುಜೂರ್' ಎನ್ನುವರಿಲ್ಲದೆ.

ಕೊನೆಗೂ ಸರಿಯಿತು ಕತ್ತಲ ಪರದೆ,
ಮೂಡಿತು ದೇಶಕೆ ಉದಯದ ಹಣತೆ.
ಗೊಂದಲ ಕಳೆಯಿತು, ನೆಮ್ಮದಿ ಮೂಡಿತು,
ಸ್ಥಿರ ಸರಕಾರಕೆ ಬುನಾದಿ ದೊರಕಿತು!