೧. ಸರ್ವಸ್ವ
ಮಗುವಿಗೆ ಮಾತೆಯ ಮಡಿಲೇ ಸರ್ವಸ್ವ
ಪ್ರಿಯತಮೆಗೆ ಪ್ರಿಯನ ಒಲವೇ ಸರ್ವಸ್ವ
ಬುವಿಗೆ ರವಿಚಂದ್ರರ ಬೆಳಕೇ ಸರ್ವಸ್ವ
ಹರಿವ ನದಿಗೆ ಕರೆವ ಕಡಲೇ ಸರ್ವಸ್ವ
ಭಕ್ತನಿಗೆ ಪರಮಾತ್ಮನ ಪಾದವೇ ಸರ್ವಸ್ವ
ಇಂದಿನ ಜನಕೆ ಚತುರವಾಣೀಯೇ ಸರ್ವಸ್ವ!
೧. ಸರ್ವಸ್ವ
ಮಗುವಿಗೆ ಮಾತೆಯ ಮಡಿಲೇ ಸರ್ವಸ್ವ
ಪ್ರಿಯತಮೆಗೆ ಪ್ರಿಯನ ಒಲವೇ ಸರ್ವಸ್ವ
ಬುವಿಗೆ ರವಿಚಂದ್ರರ ಬೆಳಕೇ ಸರ್ವಸ್ವ
ಹರಿವ ನದಿಗೆ ಕರೆವ ಕಡಲೇ ಸರ್ವಸ್ವ
ಭಕ್ತನಿಗೆ ಪರಮಾತ್ಮನ ಪಾದವೇ ಸರ್ವಸ್ವ
ಇಂದಿನ ಜನಕೆ ಚತುರವಾಣೀಯೇ ಸರ್ವಸ್ವ!
ಕಾಣುತಿಹುದು ದೀಪ ಮಾಲೆ,
ಬೀದಿಯಲ್ಲಿ ಸಾಲು ಸಾಲೆ.
ಬೆಳಕ ಬೀರಿ ನಗುವ ಚಿಮ್ಮಿದೆ,
ದೀಪಾವಳಿಯ ಹುರುಪು ತಂದಿದೆ.
ಗಂಗಾ ಮಾತೆಯೆ ಶರಣು ಶರಣು
ನೀರ ತುಂಬುವೆ ಇಂದು ನಾನು
ಶುದ್ಧವಾಗಲಿ ಮಲಿನ ತನುವು
ಹಗುರವಾಗಲಿ ನೊಂದ ಮನವು
ಕೃಷ್ಣ ದೇವನೆ ನಿನಗೆ ನಮನ
ಆಗಲಿಂದೇ ಅಸುರ ದಮನ
ನರಕ ಚತುರ್ದಶಿ ಶುಭದಿನ
ನರಕಾಸುರರಿಗೆ ಕೊನೆ ದಿನ
ಕೇಳುತಿಹುದು ಗೆಜ್ಜ ನಾದ,
ನೋಡು ಅಲ್ಲಿ ದಿವ್ಯ ಪಾದ,
ಬಂದಳಗೋ ಲಕುಮಿ ತಾಯಿ,
ಸಲಹು ಎಮ್ಮನು ನೀನು ಮಾಯಿ.
ಬಕುತಿ ಭಾವಗಳು ಚಿಮ್ಮಿ ಓಕುಳಿ
ಹರುಷದಾ ದೀಪಾವಳಿ
ದೀಪಗಳ ಸಿರಿ ಬೆಳಕಲಿ
ವಿಶ್ವ ಶಾಂತಿಯು ಹರಡಲಿ
ನೀಡಿ ಬೆಳಕಿನ ಎರವಲು
ದೀಪವಾಗಿಸು ಎನ್ನನು.
ದೀಪಾವಳಿಗಳ ಮಾಲೆಯಲ್ಲಿ,
ಚೆಂದ ಪೋಣಿಸು ಎನ್ನನು.
ಜಗಕೆ ಮಿಣುಕು ಬೆಳಕನಿತ್ತು
ಕುಣಿವೆ ನಿನ್ನ ಹೆಸರಲಿ.
ಕೆರಯ ನೀರನು ಕೆರೆಗ ಚೆಲ್ಲಿದ,
ಧನ್ಯ ಭಾವವು ನನ್ನದಿರಲಿ.
ಮನದ ತಮವು ಕರಗಲಿ,
ಜಡತೆ ಮಾಯವಾಗಲಿ.
ಜಗದ ನೋವು ನೀಗಲಿ,
ಹೊಸ ಬೆಳಕಿನಾ ಬೆಳಕಲಿ.
ಕುಡುಕನಿಗೆ ಮತ್ತಿನಲೇ ಆನಂದ
ಕಾಮುಕಗೆ ದೇಹಸುಖವೇ ಆನಂದ
ಬಕುತನಿಗೆ ಸನ್ನಿಧಿಯೇ ಆನಂದ
ಆನಂದವಿರುವಾಗ ಮತ್ತೇನು ಬೇಕೆಂದ!
ಕತ್ತೆಗೆ ಪಾಳುಗೋಡೆಯೇ ಚೆಂದ
ಅರಸನಿಗೆ ಅರೆಮನೆಯೇ ಅಂದ
ಬಡವಗೆ ಹಟ್ಟಿಯಲೇ ಆನಂದ
ಮೀನು ಅಟ್ಟುವವಗೆ ಇಲ್ಲ ದುರ್ಗಂಧ!
ಹಕ್ಕಿಗೆ ನೀರಿನಲಿ ಗೂಡಿಲ್ಲ
ಮೀನಿಗೆ ಬಾನಿನಲಿ ಎಡೆಯಿಲ್ಲ
ಚತುಷ್ಪಾದಕೆ ನೆಲವೇ ಎಲ್ಲ
ಮನುಜ ಮಾತ್ರ ಎಲ್ಲಿಯೂ ಸಲ್ಲ!
ಮತ್ತು ಬೇಕೆನುವವಗೆ ಮದ್ದೇ ಹಾಸ,
ಹಿತವಚನ ಕಿವಿಗೆ ಕಾದ ಸೀಸ
ಕಾಣಿಸದೇ ಇಲ್ಲಿ ಮತ್ತಿನ ಮೋಸ?
ಕಾಪಾಡಬೇಕಿದೆ ನಮ್ಮೆಲ್ಲರ ಕೂಸ!