Monday, June 30, 2025

ಸೀತಾಯಣ

ವೇದವತಿಯೇ ಭೂಮಿ ಸುತೆಯೇ
ಆದೆ ಜಾನಕಿ ಜನಕ ಪುತ್ರಿಯೆ
ಧಾಮ ಮಿಥಿಲೆಯು ನಾಮ ಮೈಥಿಲಿ
ತಂಗಿಯರ ಅಭಿಮಾನ ಪುತ್ತಳಿ

ಬಿಲ್ಲು ಹರನದು ಮುರಿದು ರಾಮನು
ಎಲ್ಲ ರಾಜರ ಸೊಲ್ಲ ತಡೆದನು
ವರಿಸಿ ಸೀತೆಯ ಹೃದಯ ಗೆಳತಿಯ
ತಂದನೂರಿಗೆ ಮನದ ಒಡತಿಯ

ಹೊರಟು ನಿಂತಳು ವನದ ವಾಸಕೆ
ತೊರೆದು ಅರಮನೆ ದೀರ್ಘ ಕಾಲಕೆ
ಜಿಂಕೆ ಕಂಡಳು ಆಸೆ ಪಟ್ಟಳು
ಬಂದ ರಾವಣ ಬಂದಿಯಾದಳು

ರಾಮ ಭದ್ರೆಯ ಹುಡುಕಿ ಬಂದನು
ಹನುಮ ಸೀತೆಯ ಜಾಡು ಕಂಡನು
ಲಂಕೆ ಸುಟ್ಟಿತು ಯುದ್ಧ ನಡೆಯಿತು
ಅಸುರ ರಾಜನ ಎದೆಯು ಸೀಳಿತು

ಅಗ್ನಿ ಒರೆತವ ಗೆದ್ದು ನಿಂತಳು
ಮತ್ತೆ ಕಾಡಿನ ಪಾಲು ಆದಳು
ಅವಳಿ ಪುತ್ರರ ತಾಯಿಯಾದಳು
ಕೊನೆಗೆ ತಾಯಿಯ ಮಡಿಲ ಪಡೆದಳು

No comments: