ಆದೆ ಜಾನಕಿ ಜನಕ ಪುತ್ರಿಯೆ
ಧಾಮ ಮಿಥಿಲೆಯು ನಾಮ ಮೈಥಿಲಿ
ತಂಗಿಯರ ಅಭಿಮಾನ ಪುತ್ತಳಿ
ಬಿಲ್ಲು ಹರನದು ಮುರಿದು ರಾಮನು
ಎಲ್ಲ ರಾಜರ ಸೊಲ್ಲ ತಡೆದನು
ವರಿಸಿ ಸೀತೆಯ ಹೃದಯ ಗೆಳತಿಯ
ತಂದನೂರಿಗೆ ಮನದ ಒಡತಿಯ
ಹೊರಟು ನಿಂತಳು ವನದ ವಾಸಕೆ
ತೊರೆದು ಅರಮನೆ ದೀರ್ಘ ಕಾಲಕೆ
ಜಿಂಕೆ ಕಂಡಳು ಆಸೆ ಪಟ್ಟಳು
ಬಂದ ರಾವಣ ಬಂದಿಯಾದಳು
ರಾಮ ಭದ್ರೆಯ ಹುಡುಕಿ ಬಂದನು
ಹನುಮ ಸೀತೆಯ ಜಾಡು ಕಂಡನು
ಲಂಕೆ ಸುಟ್ಟಿತು ಯುದ್ಧ ನಡೆಯಿತು
ಅಸುರ ರಾಜನ ಎದೆಯು ಸೀಳಿತು
ಅಗ್ನಿ ಒರೆತವ ಗೆದ್ದು ನಿಂತಳು
ಮತ್ತೆ ಕಾಡಿನ ಪಾಲು ಆದಳು
ಅವಳಿ ಪುತ್ರರ ತಾಯಿಯಾದಳು
ಕೊನೆಗೆ ತಾಯಿಯ ಮಡಿಲ ಪಡೆದಳು
No comments:
Post a Comment