ಮುರಳಿ ಮಾಧವ ಕಮಲ ನಯನನೆ
ಪೊರೆದು ನನ್ನನು ಸಲಹು ತಂದೆಯೆ
ವರವ ನೀಡುತ ಭಕ್ತಿಭಾವವ ಮನದಿ ನೆಲೆಗೊಳಿಸು!
ಕರುಣ ನೇತ್ರನೆ ಶರಣು ಬಂದಿಹೆ
ಪರಮಪಾವನ ಚೆಲುವ ಮೂರ್ತಿಯೆ
ಕರವ ಪಿಡಿಯುತ ಬಾಳ ಬಾಧೆಯ ನೀನೆ ಪರಿಹರಿಸು!
ಚೆಲುವ ಚೆನ್ನಿಗ ಶಾಮಸುಂದರ
ಜಲಜನಾಭನೆ ಮಧುರ ಭಾಷಿಯೆ
ಸಲಹು ಭಕುತರ ಚರಣದಡಿಯಲಿ ನಗುವ ಸೂಸುತಲಿ!
ಗೆಲುವ ತಾರೋ ನನ್ನ ಮನದಲಿ
ಬಲವ ನೀಡೋ ನನ್ನ ತನುವಲಿ
ನಿಲುವೆ ನೋಡೋ ನೀನು ನೀಡುವ ಕಾರ್ಯ ಮುಗಿಸುತಲಿ!