Showing posts with label ಭಾರತಾಂಬೆ. Show all posts
Showing posts with label ಭಾರತಾಂಬೆ. Show all posts

Friday, March 6, 2020

370 ಎಂಬ ವಿಷ

ನಾ ತಾಯಿ ಭಾರತಾಂಬೆ,
ಆದೆ ಕೆಲ ಮಕ್ಕಳ ಕೈಗೊಂಬೆ.
ಸ್ವಾರ್ಥದಾಟದಲಿ ಅವರು,
370 ಎಂಬ ವಿಷವನುಣಿಸಿದರು!

ವಿಷ ಬೆರೆತು, ಕಹಿ ಸುರಿದು,
ಅರ್ಬುದವಾಗಿ ಬೆಳೆದು,
ರಕ್ತ ಹರಿಯಿತು ಕೋಡಿ,
ಇದಾವ ಪುರುಷಾರ್ಥ ನೋಡಿ.

ಮಕ್ಕಳು ಮಕ್ಕಳ ನಡುವೆ,
ಬಡಿದಾಟದಲಿ ಆದೆ ಬಡವೆ.
ಯಾರಿಗೆ ಹೇಳಲಿ ನನ್ನ ಕಥೆಯ,
ಮನದಾಳದ ಮಾಸದ ವ್ಯಥೆಯ?

ಏಳು ದಶಕಗಳ ನೋವು,
ಸಹಿಸಲಾಗದ ಕಹಿ ಬೇವು.
ಆಗ ಹುಟ್ಟಿದ  ಹಸಿ ಹುಣ್ಣು,
ಕೆಲವರಿಗೆ ಮಾತ್ರ ಸಿಹಿ ಗಿಣ್ಣು.

ಎದ್ದು ನಿಂತನೊಬ್ಬ ಹೆಮ್ಮೆಯ ಪುತ್ರ,
ಛಾತಿ ಛಪ್ಪನ್ನಿಂಚಿನ ಗಾತ್ರ!
ಅರ್ಬುದವ ಛೇದಿಸಿ, ಮುಲಾಮು ಹಚ್ಚಿ,
ತಪ್ಪಿಸಿದ ನಾ ಆಗುವುದ ಹುಚ್ಚಿ!

ಇಂದು ಸುರಿದ ಆನಂದ ಭಾಷ್ಪದೆ,
ಆರ್ದ್ರವಾಯಿತು ಒಣಗಿದೆದೆ.
ಚಿರಕಾಲ ಸುಖವಾಗಿ ಬಾಳಿ,
ಹೊಂಗಿರಣದ ಬೆಳಗಾಗಲಿದೆ ತಾಳಿ.