ದೇವ ಹಿಡಿದೆ ಚರಣ ಕಮಲ
ಕಾವೆ ನೀನು ನಮ್ಮ ಸಕಲ
ಭವದ ಬಂಧ ಬಿಡಿಸಿಕೊಳುವ ದಾರಿ ತೋರೆಯಾ? |
ಕವಿದ ಮೋಡ ಚದುರಿ ಹೋಗಿ
ಜವನ ಭಯವು ಕಳೆದು ಹೋಗಿ
ಭವನದಲ್ಲಿ ನಿನ್ನ ಬೆಳಕ ಕಿರಣ ಕಾಣಲಿ! ||
ಎನ್ನ ಮನದ ಬಳಿಯೆ ಕುಳಿತು
ನನ್ನ ತಪ್ಪು ನೋಡುತಿದ್ದು
ಕಣ್ಣ ಮುಚ್ಚಿ ಕುಳಿತೆಯೇಕೆ ಪರಮ ಬಂಧುವೇ? |
ಎನ್ನ ತಪ್ಪ ತಿದ್ದಿ ತೀಡು
ಬಿನ್ನವಿಸುವೆ ಶಿಕ್ಷೆ ನೀಡು
ಭಿನ್ನವಾದ ವರವು ಬೇಡ ಪದುಮನಾಭನೇ! ||