Showing posts with label ವಿವೇಕಾನಂದ. Show all posts
Showing posts with label ವಿವೇಕಾನಂದ. Show all posts

Wednesday, January 20, 2021

ವಿಶ್ವಪ್ರೇಮದ ಹರಿಕಾರ

ಪರಮಹಂಸನ ಪರಮಶಿಷ್ಯ, ಹರಿಕಾರ ನೀ ವಿವೇಕಾನಂದ, 

ಭವ್ಯ ಭಾರತ ಭೂಮಿಯಲ್ಲಿ, ಪಡೆದೆ ನೀ ದಿವ್ಯ ಜನುಮ,

ತಂದೆ ಗುರುವಿಗೆ ಕೀರುತಿ, ತಂದೆ ವಿವೇಕಕೆ ಆನಂದ,

ಸಾಗರದಾಚೆಯ ನಾಡಿನಲ್ಲಿ, ಎತ್ತಿಹಿಡಿದೆ ತಾಯ ನಾಮ!


ಅದ್ವೈತ ತತ್ವ, ಸ್ವದೇಶಿ ಮಂತ್ರ, ಎತ್ತಿಹಿಡಿದ ಪುಣ್ಯಪಾದ,

ಯಾವ ಪುಣ್ಯದ ಫಲವೋ, ನೀನಾದೆ ಮಹಾಮಹಿಮ,

"ನಮ್ಮ ನಾಡು, ನಮ್ಮ ಹೆಮ್ಮೆ", ಎತ್ತಿಹಿಡಿದೆ ನಿನ್ನ ವಾದ,

ಸೋದರ ತತ್ವವ ಸಾರಿ ಜನರಿಗೆ, ತುಂಬಿದೆ ನೀ ವಿಶ್ವಪ್ರೇಮ!


ನಮ್ಮ ನಾಡ ಪುಣ್ಯ, ದೈವ ತಂದ ವರದ ಪೆಂಪು,

ಯುವಕರ ಬದುಕಿಗೆ ಬೆಳಕನಿತ್ತ ಕಾಮಧೇನು!

ನಿನ್ನ ಮಹಿಮೆಗೆ ಮಾರಿಹೋದರಲ್ಲ ಕುವೆಂಪು,

ಹರಡಿದರು ಕನ್ನಡದಲ್ಲೂ ನಿನ್ನ ಮಹಿಮೆಯ ಜೇನು!


ಇಂದು ನಿನ್ನ ಜನ್ಮದಿನವು, ನೆನಸಿಕೊಳ್ಳುವ ಶ್ರೇಷ್ಠ ದಿನವು,

ಚೈತನ್ಯ ತರಲಿ ಬದಕಿಗೆ, ನಮ್ಮ ಪಾಲಿನ ಮಹಾ ವರವು!

(ಸಾನೆಟ್‌/ಸುನೀತ)