ಕುಡುಕನಿಗೆ ಮತ್ತಿನಲೇ ಆನಂದ
ಕಾಮುಕಗೆ ದೇಹಸುಖವೇ ಆನಂದ
ಬಕುತನಿಗೆ ಸನ್ನಿಧಿಯೇ ಆನಂದ
ಆನಂದವಿರುವಾಗ ಮತ್ತೇನು ಬೇಕೆಂದ!
ಕತ್ತೆಗೆ ಪಾಳುಗೋಡೆಯೇ ಚೆಂದ
ಅರಸನಿಗೆ ಅರೆಮನೆಯೇ ಅಂದ
ಬಡವಗೆ ಹಟ್ಟಿಯಲೇ ಆನಂದ
ಮೀನು ಅಟ್ಟುವವಗೆ ಇಲ್ಲ ದುರ್ಗಂಧ!
ಹಕ್ಕಿಗೆ ನೀರಿನಲಿ ಗೂಡಿಲ್ಲ
ಮೀನಿಗೆ ಬಾನಿನಲಿ ಎಡೆಯಿಲ್ಲ
ಚತುಷ್ಪಾದಕೆ ನೆಲವೇ ಎಲ್ಲ
ಮನುಜ ಮಾತ್ರ ಎಲ್ಲಿಯೂ ಸಲ್ಲ!
ಮತ್ತು ಬೇಕೆನುವವಗೆ ಮದ್ದೇ ಹಾಸ,
ಹಿತವಚನ ಕಿವಿಗೆ ಕಾದ ಸೀಸ
ಕಾಣಿಸದೇ ಇಲ್ಲಿ ಮತ್ತಿನ ಮೋಸ?
ಕಾಪಾಡಬೇಕಿದೆ ನಮ್ಮೆಲ್ಲರ ಕೂಸ!