Showing posts with label ನಾರಿ ಶೋಷಣೆ. Show all posts
Showing posts with label ನಾರಿ ಶೋಷಣೆ. Show all posts

Saturday, December 4, 2021

ಯತ್ರ ನಾರ್ಯಸ್ತು ಪೂಜ್ಯಂತೆ...

ನಾಚಿಕೆಯಲಿ ತಲೆಯಿಂದು ತಗ್ಗಿದೆ, ನಿಂತಿಲ್ಲವಿನ್ನೂ ಕಣ್ಣೀರಧಾರೆ,

ಭಾರತಾಂಬೆಯ ಮಡಿಲಲಿ ಮುದುಡಿವೆ ಹೊಸ ಕನಸುಗಳು,

ಪೈಶಾಚಿಕತೆಗೆ ಬಲಿಯಾಗಿ ನಲುಗಿವೆ ನವಕುಸುಮಗಳು.


“ಕಾಮಾತುರಾಣಾಂ ನ ಭಯಂ ನ ಲಜ್ಜಾ”,

ಹತೋಟಿಯಿಲ್ಲದ ಮೃಗಗಳೇ ನಾವು?

ನಾಗರಿಕತೆಯು ಕೇವಲ ಕಥೆಯಾಗುಳಿದಿದೆಯೇ?


“ನ ಸ್ತ್ರೀ ಸ್ವಾತಂತ್ರ್ಯಮರ್ಹತಿ”

ಭಂಡ, ಪುಂಡ ಕಾಮುಕರ ಭಯವೇ?

ಅವರನ್ನು ಬದಲಾಯಿಸಲಾಗದ ಅಸಮರ್ಥತೆಯೇ?


“ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ”

ಆ ತಾಯಿಯಿಂದು ಶಕ್ತಿಹೀನಳಾಗಿ ತಲೆತಗ್ಗಿಸಿರುವಳೇ?

ಮಹಿಷರು, ರಕ್ತ ಬೀಜಾಸುರರು ಅಟ್ಟಹಾಸಗೈಯ್ಯುತ್ತಿರುವರೇ?


“ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ”

ಹೇ ದೇವ! ಇನ್ನೂ ಧರ್ಮವು ಉಳಿದಿದೆಯೇ ಭೂಮಿಯ ಮೇಲೆ?

ದ್ರೌಪದಿಯ ಪೊರೆದರೆ ಸಾಕೆ? ಸಂಕಟದ ಆರ್ತನಾದವು ಕೇಳುತ್ತಿಲ್ಲವೇ?


“ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ:”

ತೊರೆದುಬಿಟ್ಟರೇ ದೇವತೆಗಳು ನಮ್ಮ ನಾಡನೇ?

ನಿಲ್ಲದಾಗಿದೆ ಈ ನಾಚಿಕೆಗೇಡಿನ ಪೈಶಾಚಿಕ ವರ್ತನೆ!