ನಡೆ, ಕತ್ತಲಿನಿಂದ ಬೆಳಕಿನೆಡೆಗೆ,
ಭ್ರಮೆಯಿಂದ ವಾಸ್ತವದೆಡೆಗೆ!
ಆಗುತ್ತಿರುವೆವು ನಾವು ಕುರಿಗಳು,
ಹುಲಿಗಳು ಈ ರಾಜಕಾರಣಿಗಳು!
ಎಚ್ಚೆತ್ತುಕೊಳ್ಳಬೇಕಿದೆ ಗೆಳೆಯರೆ ನಾವು,
ಹುಲಿಕುರಿಯಾಟದಲ್ಲಿ ಬಲಿಯಾಗುವ ಮುನ್ನ!
ಕತ್ತಲಿದೆ, ಕತ್ತಲಿದೆ ಮನದಲ್ಲಿ!
ಮನದ ಸೂರ್ಯನ ಮರೆಮಾಡಿವೆ,
ಅಜ್ಞಾನದ ಕರಿ ಮೋಡಗಳು.
ಗುರು ಬೇಕು ಮೋಡ ಚದುರಿಸಲು!
ಜ್ಞಾನಭಂಡಾರದ ದೀಪವಿತ್ತಿಹರು ಹಿರಿಯರು,
ಆ ದೀಪದ ಗುಂಡಿಯೊತ್ತಬೇಕಿದೆ ಅರಿತು,
ತಮಾಂಧಕಾರವ ಚದುರಿಸಲು,
ಸತ್ವದ ಬೆಳಕಲ್ಲಿ ಸಂಚರಿಸಲು!
No comments:
Post a Comment