Showing posts with label ಕತ್ತಲು. Show all posts
Showing posts with label ಕತ್ತಲು. Show all posts

Wednesday, January 12, 2022

ಅಂಧಕಾರ

ಕುರುಡು ಮನಸಿಗೆ ಅಂಧಕಾರವು,

ಬಾಯಾರಿದೆ ಜ್ಞಾನದ ಬೆಳಕಿಗೆ.

ಅಮಾವಾಸ್ಯೆಯ ಇರುಳಿನಲ್ಲಿ

ಕಾದಿದೆ ರವಿ ಚಂದ್ರರಿಗೆ!


ಇರುಳ ನಂಬಿದ ದುರುಳರೆಲ್ಲರ,

ಅಟ್ಟಹಾಸವು ಮಿತಿಮೀರಿದೆ.

ಹರಿಯಬೇಕಿದೆ ಕಾಲದ ಬೆಳಕು,

ಸರಿಸೆ ಮುಚ್ಚಿದ ಪರದೆಯ!


ಕಣ್ಣು ಮುಚ್ಚಲು ಕಾಣದೇನೂ,

ಕಣ್ತೆರೆ ಜಗದ ಕಟುಸತ್ಯಕೆ,

ಕತ್ತಲಾದ ಬದುಕುಗಳಿಗೆ

ಸುತ್ತ ದೀಪದ ಬೆಳಕಿದೆ!



Wednesday, January 20, 2021

ಕತ್ತಲಿನಿಂದ ಬೆಳಕಿನೆಡೆಗೆ

 ನಡೆ, ಕತ್ತಲಿನಿಂದ ಬೆಳಕಿನೆಡೆಗೆ,

ಭ್ರಮೆಯಿಂದ ವಾಸ್ತವದೆಡೆಗೆ!


ಆಗುತ್ತಿರುವೆವು ನಾವು ಕುರಿಗಳು,

ಹುಲಿಗಳು ಈ ರಾಜಕಾರಣಿಗಳು!

ಎಚ್ಚೆತ್ತುಕೊಳ್ಳಬೇಕಿದೆ ಗೆಳೆಯರೆ ನಾವು,

ಹುಲಿಕುರಿಯಾಟದಲ್ಲಿ ಬಲಿಯಾಗುವ ಮುನ್ನ!


ಕತ್ತಲಿದೆ, ಕತ್ತಲಿದೆ ಮನದಲ್ಲಿ!

ಮನದ ಸೂರ್ಯನ ಮರೆಮಾಡಿವೆ,

ಅಜ್ಞಾನದ ಕರಿ ಮೋಡಗಳು.

ಗುರು ಬೇಕು ಮೋಡ ಚದುರಿಸಲು!


ಜ್ಞಾನಭಂಡಾರದ ದೀಪವಿತ್ತಿಹರು ಹಿರಿಯರು,

ಆ ದೀಪದ ಗುಂಡಿಯೊತ್ತಬೇಕಿದೆ ಅರಿತು,

ತಮಾಂಧಕಾರವ ಚದುರಿಸಲು,

ಸತ್ವದ ಬೆಳಕಲ್ಲಿ ಸಂಚರಿಸಲು!