Sunday, March 21, 2021

ಕನಕದೇಹಿ ವೃತ್ತ

ಮುರಳಿ ಮಾಧವನೆ ಕರುಣ ಸಾಗರನೆ ಚರಣ ತೋರಿಸೆನೆಗೇ|

ವರದ ವೇದಗಳ ಅಸುರ ಬಂಧನವ ಬಿಡಿಸೊ ಮೀನತನುನೀ|

ಸುರರ ಜೋಳಿಗೆಗೆ ಕೊಡಲು ಜೀವಸುಧೆ ಪಡೆದೆ ಕೂರ್ಮಜನುಮಾ|

ಪೊರೆದೆ ಭೂಮಿಯನು ಶರಧಿಯಾಳದಲಿ ಮೆರೆದೆ ಸೂಕರಮುಖಾ|


ಪಡೆದೆ  ಸಿಂಹನರ ಜನುಮ ರಕ್ಕಸನ ಉದರ ಸೀಳಿಬಿಡಲೂ|

ನಡೆದೆ ಮೂರಡಿಯ ಬಲಿಯ ಭೂತಳಕೆ ತುಳಿದು ನೂಕಿಬಿಡಲೂ|

ಬಿಡದೆ ಭೂಸುರರ ತರಿದು ಕೊಲ್ಲುತಲಿ ಪರಶು ಬೀಸುತಿರಲೂ|

ನಡೆದೆ ಕಾಡಿನಲಿ ಪಿತನ ಮಾತುಗಳ ಗೌರವ ಕಾಪಿಡುತಲೀ|


ನರರ ಭಾಗ್ಯದಲಿ ಬರೆದೆ ಗೀತೆಯನು ಮೆರೆದೆ ವೇದಗಳನೂ|

ಪರರ ಕಷ್ಟಗಳ ಅಳಿಸಿ ದಮ್ಮವನು ಮೆರೆದೆ ಬದ್ಧತೆಯಲೀ|

ಅರಿವು ಬಿಟ್ಟವರ ತರಿದು ಅಟ್ಟಲಿಕೆ ಯುಗದ ಕಲ್ಕಿಪುರುಷಾ|

ಗುರುವೆ ಉದ್ಧರಿಸು ಕೊಡುತ ಮೋಕ್ಷವನು ಮನುಜ ಜನ್ಮಗಳಿಗೇ|

No comments: