1. ವಿಷಯ: *ಅನ್ವೇಷಣೆ*
ಮುಗಿಯದಾಗಿದೆ ಈ ಅನ್ವೇಷಣೆ,
ಬೇಕಾಗಿದೆ ಇಂದ್ರಿಯ ಸಮರ್ಪಣೆ,
ಮೋಕ್ಷದ್ವಾರಕೆ ಇದೊಂದೇ ದಾರಿಯು,
ಆಗಿದೆ ದೇವದೇವನ ಘೋಷಣೆ!
2. ವಿಷಯ: *ಜೋಮಾಲೆ*
ಬಂಧಿಯಾಗಿಸಲಿ ನಿನ್ನ ತೋಳಮಾಲೆ
ಅದೇ ನನ್ನ ಸಿಂಗರಿಸುವ ಹೂಮಾಲೆ
ನಿನ್ನ ಪ್ರೀತಿಯ ಪ್ರೇಮದ ಕಾಣಿಕೆಗೆ
ಇಗೋ ಕೊರಳಿಗೆ ರನ್ನದ ಜೋಮಾಲೆ
3. ಸುಗ್ಗಿ ಹಬ್ಬ
ಸುಗ್ಗಿಯ ಹಬ್ಬದ ಸುಂದರ ಘಳಿಗೆ
ಸಗ್ಗದ ಸಂಭ್ರಮ ಬಂದಿದೆ ಇಳೆಗೆ
ಎಳ್ಳು ಬೆಲ್ಲದ ಸವಿಯನು ಹಂಚುತ
ಸೇರಲು ತಂದಿದೆ ಸ್ನೇಹದ ಗುಳಿಗೆ
4. ಕ್ಷಣಿಕ
ಹಣ ತರುವ ಆನಂದ ಕ್ಷಣಿಕವೇ ಮಾತ್ರ
ಕಳೆದುಹೋಗುವುದು ಎಷ್ಟೇ ಇರಲಿ ಗಾತ್ರ
ಜೀವನದಿ ಬೇಕಿಹುದು ಶಾಶ್ವತ ಆನಂದ
ಗುಣವು ಕೊಡುವುದು ಸದಾನಂದದ ಸೂತ್ರ
5. ವ್ಯಕ್ತಿತ್ವ
ದೇಹ ಊನವಾಗಿರಲು ದೈವವೇ ಕಾರಣ
ವ್ಯಕ್ತಿತ್ವವೇ ಊನವಿರಲು ನಾವೇ ಕಾರಣ
ದೇವ ಕೊಟ್ಟಿದುದ ನಗುತ ಸ್ವೀಕರಿಸುತ
ನಮದಾದ ವ್ಯಕ್ತಿತ್ವವ ನಾವೇ ರೂಪಿಸೋಣ
ವ್ಯಕ್ತಿಗಳ ನಡೆನುಡಿಯು ಆಂತರಿಕ ಭಾವಗಳು
ಕಷ್ಟನಷ್ಟಗಳು ಬಂದಾಗ ಆರಿಸುವ ದಾರಿಗಳು
ಧನಕನಕ ಗಳಿಸುವ ವ್ಯಯಿಸುವ ರೀತಿ ನೀತಿ
ಆಗುತಿವೆ ಮನುಜನ ವ್ಯಕ್ತಿತ್ವದ ಪದರಗಳು
No comments:
Post a Comment