Wednesday, January 12, 2022

ಅಂಧಕಾರ

ಕುರುಡು ಮನಸಿಗೆ ಅಂಧಕಾರವು,

ಬಾಯಾರಿದೆ ಜ್ಞಾನದ ಬೆಳಕಿಗೆ.

ಅಮಾವಾಸ್ಯೆಯ ಇರುಳಿನಲ್ಲಿ

ಕಾದಿದೆ ರವಿ ಚಂದ್ರರಿಗೆ!


ಇರುಳ ನಂಬಿದ ದುರುಳರೆಲ್ಲರ,

ಅಟ್ಟಹಾಸವು ಮಿತಿಮೀರಿದೆ.

ಹರಿಯಬೇಕಿದೆ ಕಾಲದ ಬೆಳಕು,

ಸರಿಸೆ ಮುಚ್ಚಿದ ಪರದೆಯ!


ಕಣ್ಣು ಮುಚ್ಚಲು ಕಾಣದೇನೂ,

ಕಣ್ತೆರೆ ಜಗದ ಕಟುಸತ್ಯಕೆ,

ಕತ್ತಲಾದ ಬದುಕುಗಳಿಗೆ

ಸುತ್ತ ದೀಪದ ಬೆಳಕಿದೆ!



No comments: