Saturday, June 27, 2020

ಬೆಂಗಳೂರಲಿ ಕೊರೋನಾ

ಅಟ್ಟಹಾಸವ ಗೈಯುತಿದೆ ಕೊರೋನಾ,
ಬೆಂಗಳೂರನು ಮಟ್ಟ ಹಾಕುತಿದೆ ಈ  ದಿನ!

ನನಗೇನಾಗದು ಎಂದು ಬೀಗುತ್ತಿದ್ದವರಿಗೆ
ತಾನಾರೆಂದು ತೋರುತಿದೆ ಕೊರೋನಾ!
ತನ್ನ ನಿರ್ಲಕ್ಷಿಸಿ ಮೋಜು ಮಾಡಿದವರ,
ಬೆನ್ನು ಹತ್ತಿ ಕೇಕೆ ಹಾಕುತಿದೆ ಈ ದಿನ!

ಪರದೆಯ ಮುಂದೆ ಕುಳಿತು ದೇಶ ವಿದೇಶಗಳ,
ದೂರದೂರುಗಳ ವ್ಯಥೆಗಳ ನೋಡುತ್ತಿದ್ದೆವು.
ಈಗ ನಮ್ಮೂರಲೇ, ನಮ್ಮ ಗಲ್ಲಿಯಲೇ ಗೆಜ್ಜೆಕಟ್ಟಿ,
ತಾಂಡವವಾಡುತಿದೆ ನಿರ್ದಯಿ ಕೊರೋನಾ!

ಎಚ್ಚರವಿರಲಿ, ಎಚ್ಚರವಿರಲಿ ಬಂಧುಗಳೇ,
ಜಿಹ್ವಾಚಾಪಲ್ಯವ ಮನೆಗೆ ಸೀಮಿತಗೊಳಿಸಿ,
ಹೊಸ ಒಡವೆ ವಸ್ತ್ರಗಳು ಬೇಕೆ ಈಗ?
ಸತ್ತರೆ ಹೆಣದ ಮೇಲೂ ಹಾಕಲಾಗದು!

ಮಂಗಳಾರತಿಯ ಕರ್ಪೂರ ಕಾರಗಿದಂತೆ
ಮಾಯವಾಗುವ ಮನುಜ ಸದ್ದಿಲ್ಲದಂತೆ!
ಮುಖದರ್ಶನವಿಲ್ಲ, ದೇಹದಧಿಕಾರವಿಲ್ಲ,
ಬೇಕೆ ಇಂತಹ ಸಾವು? ಬೇಡ, ಬೇಡ!

No comments: