Thursday, April 30, 2020

ನಮಗಿನ್ನಾರು?













ಹುಟ್ಟಿಸಿದ ದೇವನು,
ಹುಲ್ಲು ಮೇಯಿಸನಂತೆ!
ಶಾಸ್ತ್ರ ಹೇಳುವುದಕ್ಕೆ,
ಬದನೇಕಾಯಿ ತಿನ್ನುವುದಕ್ಕೆ!

ದೇವರಿಗೂ ತಿಳಿಯದಲ್ಲ,
ನಮ್ಮ ವ್ಯಥೆಯ ಕಥೆಯು!
ಇನ್ನಾರು ಬರುವರು, ಬಂದು
ಕಣ್ಣೀರ ಒರೆಸುವರು?

ಹುಲ್ಲೂ ಇಲ್ಲ ತಿನ್ನಲು,
ಬೊಗಸೆ ನೀರಿಲ್ಲ ಕುಡಿಯಲು.
ದೇವರೇ ಕೈಬಿಟ್ಟ ಹಾಗಿದೆ,
ಆಧಾರ ಇನ್ನು ನಮಗೇನಿದೆ?

ಪ್ರತಿದಿನದ ಗಳಿಕೆಯಲಿ,
ತುತ್ತು ನಾಲ್ಕು ಹೊಟ್ಟೆಯಲಿ,
ಬದುಕ ಬಂಡಿಯ ಗಾಲಿ,
ತಿರುಗುತ್ತಿತ್ತು, ಮುಂದೆ ಸಾಗುತ್ತಿತ್ತು.

ಯಾರೋ ಸೋಂಕಿತರಾದರೆ,
ನಮ್ಮ ಹೊಟ್ಟೆಗೇಕೆ ಬರೆ?
ಮಾರಿಯು ರಂಗಕ್ಕಿಳಿದರೆ,
ನಮ್ಮ ಜೀವನಕ್ಕೇಕೆ ತೆರೆ?

ಬಂದಿದ್ದರೆ ಸೋಂಕು ನಮಗೂ,
ಇರುತ್ತಿತ್ತೇನೋ ಬೆಲೆ  ನಮ್ಮ ದನಿಗೂ,
ಕೇಳುತ್ತಿತ್ತೇನೋ ನಮ್ಮದೂ ಕೂಗು!
ಸಿಗುತ್ತಿತ್ತೇನೋ ಅನ್ನ ಕೊನೆಗೂ!



No comments: