Saturday, April 25, 2020

ಆತ್ಮಾವಲೋಕನ



ದೇವರು ಕರಣಾ ಮೂರ್ತಿ,
ಸೋಲಲು ಬಿಡನು ಪೂರ್ತಿ.
ಮುಚ್ಚಿದರೆ ಹೋಗುವ ದಾರಿ,
ತೋರುವ ಬೇರೆ ರಹದಾರಿ.

ಮುಚ್ಚಿ ಮನೆಯ ಬಾಗಿಲನು,
ತೆರೆಯೋಣ ಮನದ ಕದವನ್ನು.
ಹೊರಗಿನ ಕೆಲಸವ ಮರೆತು,
ಚಿಂತಿಸೋಣ ಒಳಗಿನ ಕುರಿತು.

ಹೊರಗಿನ ಓಟದ ಓಘದಲಿ,
ಆಗಿದೆ ಸ್ವವಿಮರ್ಶೆಯ ಬಲಿ.
ಕುಳಿತು ಚಿಂತಿಸೊ ಸುಸಮಯ,
ಮತ್ತೆ ಸಿಗುವುದೇ ಈ ಸಮಯ?

ನೆನೆದು ಹಿಂದಿನ ನಡೆನುಡಿಯ,
ಗುರುತಿಸಿ ಮಾಡಿದ ಗಡಿಬಿಡಿಯ,
ಸಂಭಾಷಿಸಿ ಒಳಗಿನ ಗೆಳೆಯನೊಡೆ,
ತಿದ್ದೋಣ ನಮ್ಮ ತಪ್ಪು ನಡೆ.

ಉಳಿಯಲಿ, ಬೆಳೆಯಲಿ ಸಂಬಂಧ,
ಬಿಗಿಯಾಗಲಿ ಪ್ರೀತಿಯ ಅನುಬಂಧ.
ನಗುನಗುವ ನಲಿವ ಕುಟುಂಬಗಳು,
ದೇಶದ ಆಧಾರ ಸ್ತಂಭಗಳು!


No comments: