Monday, July 11, 2022

ವಾರ್ಧಕ ಷಟ್ಪದಿ

ಯಶವನೇನೆಂಬೆ ಧನ ವಿದ್ಯೆ ಸಿರಿ ಸಂಪತ್ತೆ

ಪಶು ಭೂಮಿಯಧಿಕಾರ ಯೌವ್ವನದ ಬಲಗಳೇ

ದಶಕಂಠ ಹೊಂದಿದ್ದವೆಲ್ಲವೂ ಮಣ್ಣಾಗಿ ಪಶುವಂತೆ ಬಲಿಯಾದನು

ಯಶವ ಕ್ಷಣಿಕದ ಮಿಂಚಂತೆ ಕಂಡರೆಷ್ಟೋ

ನಶಿಸದಾ ಯಶವನ್ನು ಪಡೆದವರು ಕೆಲವರೇ

ವಶವಾಯ್ತು ಯಶವು ಗುಣದಲ್ಲಿ ನಿಂತವಗೆ ಹೆಸರಾಗುವನು ಕೊನೆಯವರೆಗೆ


ಕೋಪವೇ ಬಂದಿರಲಿ ಮನಸುಗಳು ಬೆಂದಿರಲಿ

ತಾಪದಾ ನುಡಿ ಬೇಡ  ಕಾತುರದ ನಡೆ ಬೇಡ

ಜೋಪಡಿಗೆ ಬೆಂಕಿಯನು ಹಚ್ಚಿಕೊಳ್ಳುವರಾರು ಮೊಗದ ಮೇಗಡೆ ಮಸಿಯನು

ಕೋಪವೇ ಸರ್ವನಾಶದ ಬೀಜ ಬಿತ್ತದಿರಿ ಬುವಿಯಲ್ಲಿ

ತಾಪತ್ರಯಗಳು ಬಾಳಿನಲಿ ಸಾಮಾನ್ಯ ವಿಧಿಯಾಟದಲಿ

ಕೋಪತಾಪಗಳಿಗಿದ್ದರಂಕುಶ ಬಾಳುಹಸನಾಗಿರಲು ಜೀವ ತಂಪು

No comments: