ಬ್ರಹ್ಮಚರ್ಯಾಶ್ರಮದಲ್ಲಿ ಕಾಮ ಕುಸುಮಗಳ ತೋಟ,
ಗೃಹಸ್ಥಾಶ್ರಮದಲ್ಲಿ ಕೊಲೆ, ಸುಲಿಗೆಗಳ ಪರಿಪಾಠ,
ವಾನಪ್ರಸ್ಥದಲ್ಲಿ ಜೀವಿಸಲು ಜಂಜಾಟ,
ಸನ್ಯಾಸಾಶ್ರಮದಲ್ಲಿ ಸಕಲ ವೈಭೋಗದಾಟ!
ತೋಟವ ಮೇಯುವ ಬೇಲಿಯಂತಹ ಅಧಿಕಾರವರ್ಗ,
ಕಾರ್ಮಿಕವರ್ಗದಲಿ ಸೋಮಾರಿತನದ ಅಧಿಪತ್ಯ,
ಆರಕ್ಷಕ ದಳದಲ್ಲಿ ಭಕ್ಷಕರೆ ಬಹಳ,
ಯಥಾ ಪ್ರಜಾ ತಥಾ ರಾಜ! ಯಥಾ ಪ್ರಜಾ ತಥಾ ರಾಜ!
ತಾಯ ಹಾಲಿನಲೇ ಮೂಡುತಿದೆ ನಂಜು,
ಒಳಗಣ್ಣುಗಳಿಗೆ ಕವಿಯುತಿದೆ ಮಂಜು,
ಮುಳುಗುತಿದೆ ಇಂದು ಅಧರ್ಮದಲಿ ಭಾರತ,
ಧರ್ಮಸಂಸ್ಥಾಪನೆ ಇನ್ನು ಸನ್ನಿಹಿತ! ಸನ್ನಿಹಿತ!
No comments:
Post a Comment