ಮಧ್ಯರಾತ್ರಿಯ ನೀರವತೆಯಲ್ಲಿ
ಸಿಡಿಯಿತು ಅಗ್ನಿಪರ್ವತ
ಕೋಟಿಕೋಟಿ ಜನರ ಒಡಲ ಬೆಂಕಿ
ಹೊರ ಹರಿಯಿತು ಶತ್ರುಗಳ
ಮಾರಣ ಹೋಮಕ್ಕೆ ಸಾಕ್ಷಿಯಾಗಿ
ವರುಷ ವರುಷಗಳ ತಾಪ
ಒಳಗೊಳಗೇ ಕುದಿಯುತಿತ್ತು
ಪಾಪದ ಕೊಡ ತುಂಬಿ ನಿಂತಿತ್ತು
ಬೆನ್ನಿಗೆ ಚೂರಿ ಹಾಕುವ ಹೇಡಿಗಳ
ಕಾಲು ಕೆರೆದು ಜಗಳಕ್ಕೆ ಎಳೆಯುವ ದಾಡಿಗಳ
ಕಾರ್ಯಕ್ಕೆ ಬೇಸತ್ತು ಹೋಗಿತ್ತು ದೇಶ
ಮಧ್ಯರಾತ್ರಿಯ ನೀರವತೆಯಲ್ಲಿ
ಸಿಡಿಯಿತು ಅಗ್ನಿಪರ್ವತ
ನಂತರದಲ್ಲಿ ಸ್ಮಶಾನ ಮೌನ
ಓಂ ಶಾಂತಿ ಶಾಂತಿ ಶಾಂತಿಃ
No comments:
Post a Comment