(ಛಂದೋಬದ್ಧ *ಸಾಂಗತ್ಯ* ಪ್ರಕಾರದ ರಚನೆ)
ಪಾವನ ಪುನೀತ ಮನದವ ಗೆಳೆಯನೆ
ದೇವನ ಮನೆಗೆ ನಡೆದೆ
ಜೀವನ ಯಾನವ ಬೇಗನೆ ಮುಗಿಸುತ
ಸಾವಿನ ಬಾಗಿಲ ತೆರೆದೆ
ರಸಿಕರ ಮನದಲಿ ತಾರೆಯ ತೆರದಲಿ
ಹಸಿರಿನ ನೆನಪಲಿ ಉಳಿದೆ
ಹಸಿವನು ಅಳಿಸಿದೆ ವಿದ್ಯೆಯ ನೀಡಿದೆ
ಉಸಿರಿಗೆ ಜೀವವನಿತ್ತೆ
ಕಾಯಕ ಪ್ರೇಮದ ಕರುಣೆಯ ಹೃದಯದ
ತಾಯಿಯ ಕರುಳನು ಪಡೆದೆ
ನಾಯಕ ನಟನೆಯ ಚಿತ್ರದೆ ಮಾಡುತ
ನಾಯಕ ಜನರಿಗೆ ಆದೆ
ದಾನಕೆ ಸೇವೆಗೆ ಮಿತಿಯೇ ಇಲ್ಲದೆ
ದೀನರ ದಲಿತರ ಪೊರೆದೆ
ಜೇನಿನ ಮಾತಲಿ ಉತ್ತಮ ನಡೆಯಲಿ
ಗಾನವ ಪಾಡುತ ಮೆರೆದೆ
ಮುತ್ತಿನ ರಾಜನ ಮುದ್ದಿನ ಕುವರನೆ
ಮುತ್ತಿನ ಮಣಿಯೊಲು ಹೊಳೆವೆ
ಕತ್ತಲು ತುಂಬಿದ ಮನಗಳ ಬೆಳಗುತ
ಹತ್ತಿರ ಎದೆಯಲೆ ಇರುವೆ!
No comments:
Post a Comment