Thursday, April 20, 2023

ಹೊಸ ನಕ್ಷತ್ರ

ಉದಯವಾಯಿತು ಮಿನುಗು ಚುಕ್ಕಿಯು

ಹೃದಯದಾಗಸ ಬೆಳಗಿತು

ಕದವ ತಟ್ಟುತ ಎಲ್ಲ ವೈಶ್ಯರ

ಮುದದೆ ಕೂಗಿ ಕರೆಯಿತು

 

ಆಧ್ಯಾತ್ಮವು ಬಳಿಗೆ ಸೆಳೆಯಿತು

ಎಳೆಯ ಚಿಗುರುವ ವಯಸಲೇ

ಶಾರದೆಯ ಪ್ರಿಯಪುತ್ರನಾದೆ

ಬೆಳೆದು ಹೆಮ್ಮರವಾಗುತ

 

ಬಂದೆ ಸಚ್ಚಿದಾನಂದ ಗುರುವೆ

ನಮಗೆ ದಾರಿ ತೋರಲು

ನಿನ್ನ ಹಿಂದೆ ನಾವು ನಡೆವೆವು

ನಮ್ಮ ಬಾಳನು ಬೆಳಗಲು

 

ಗಂಗಾ ನದಿಯ ತೀರದಲ್ಲಿ

ಹೊಸತು ಜನುಮವ ಪಡೆದೆ ನೀ

ನಮ್ಮ ಪೀಠವ ಬೆಳಗಲೆಂದೇ

ನಮ್ಮ ನಡುವಿಗೆ ಬಂದೆ ನೀ

 

ಜನರ ಬಾಳಲಿ ಪ್ರೀತಿ ಪ್ರೇಮದ

ಬೀಜ ಬಿತ್ತಲು ಬಂದೆ ನೀ

ದೀನ ದಲಿತರ ಬಾಳನಲ್ಲಿ

ಬೆಳಕ ಕಿರಣವ ತಂದೆ ನೀ

 

ವೀಣೆ ನಾದದ ಮಾಧುರ್ಯದಲ್ಲಿ

ತೇಲಿ ಮುಳುಗಿಸು ನಮ್ಮನು

ವೇದಜ್ಞಾನದ ವೇದಾಂತಿ ನೀನು

ಅರಿವ ನೀಡಿ ಹರಸೆಮ್ಮನು

 

ವೈಶ್ಯಕುಲದ ಪೀಠಾಧಿಪತಿಯಾಗುತ್ತಿರುವ ಶ್ರೀ ಸಚ್ಚಿದಾಂದ ಸ್ವಾಮಿ ಸರಸ್ವತಿಯವರ ಬಗ್ಗೆ ಕವನರೂಪದ ಭಕ್ತಿ ಸಮರ್ಪಣೆ!



No comments: