ಚೋಕಾ (ಜಪಾನಿ ಕವನ ಪ್ರಕಾರ)
೧,೩,೫,೭ನೆಯ ಸಾಲುಗಳಲ್ಲಿ ೫ ಅಕ್ಷರಗಳು
೨,೪,೬,೮,೯ನೆಯ ಸಾಲುಗಳಲ್ಲಿ ೭ ಅಕ್ಷರಗಳು
ಒಟ್ಟು - ೫೫ ಅಕ್ಷರಗಳುಏಕದಂತನೇ
ಸಂಕಷ್ಟಹರ ನೀನೇ
ಮುದ್ದು ಗಣಪ
ಮೂಷಿಕ ವಾಹನನೇ
ಪಾರ್ವತಿ ಪುತ್ರ
ಪರಮಪಾವನನೇ
ಪೊಡಮಡುವೆ
ನಿನಗೆ ಹರಸೆನ್ನ
ಜ್ಞಾನಪ್ರದಾಯಕನೇ!
ಚೋಕಾ (ಜಪಾನಿ ಕವನ ಪ್ರಕಾರ)
೧,೩,೫,೭ನೆಯ ಸಾಲುಗಳಲ್ಲಿ ೫ ಅಕ್ಷರಗಳು
೨,೪,೬,೮,೯ನೆಯ ಸಾಲುಗಳಲ್ಲಿ ೭ ಅಕ್ಷರಗಳು
ಒಟ್ಟು - ೫೫ ಅಕ್ಷರಗಳುವಂದಿಸುವೆ ಪೊಡಮಡುವೆ ತಾಯೆ ಶಾರದೆಯೆ
ಕಂದ ನಿನ್ನವನು ನಾ ಸಲಹಿ ಎನ್ನ ಕಾಯೆ
ಅಕ್ಕರದ ಅಕ್ಕರೆಯ ಅರಿವ ಎನಗೆ ನೀಡೆ
ಮಿಕ್ಕಿರುವ ಬದುಕಿಗೆ ಬೆಳಕ ಹಾಡು ಹಾಡೆ
ಪುಸ್ತಕದಲಿ ದೇಗುಲವ ತೋರಿದೆ ನನಗೆ
ಮಸ್ತಕದ ದೇಗುಲದಿ ಸದಾ ಪೂಜೆ ನಿನಗೆ
ಶ್ವೇತವಸ್ತ್ರದ ರಾಣಿ ಹರಸು ವೀಣಾ ಪಾಣಿ
ಜ್ಯೋತಿ ಬೆಳಗುವೆ ನಿನಗೆ ಸ್ವೀಕರಿಸು ವಾಣಿ
ಮೀಯಿಸು ನನ್ನನ್ನು ಜ್ಞಾನದಾ ಜಲದಲ್ಲಿ
ತೋಯಿಸು ಮತಿಯನ್ನು ಕಲಿವ ಆಸೆಯಲಿ
ಕಲಿಕೆಯೇ ಮೆಟ್ಟಿಲು ನಿನ್ನ ತಾಲಪುವ ದಾರಿ
ಕಲಿಯುವೆನು ದಿನನಿತ್ಯ ನಿನ್ನ ಪದಾದ ಕೋರಿ
ತುರುಬಲಿ ತಾರೆಗಳ ಬಂಧಿಸಿ,
ಚಂದ್ರ ತಿಲಕವ ಧರಿಸಿ,
ಕಪ್ಪು ಸೀರೆಯನುಟ್ಟ ಅಂದ,
ಚೆಲುವೆ ನೀ ಬಂದೆ ಎಲ್ಲಿಂದ?
ಯಾವ ಲೋಕದ ಚೆಲುವೆ ನೀನು?
ದಾರಿ ತಪ್ಪಿ ಬಂದೆಯೇನು?
ನನ್ನ ಕಣ್ಣಿಗೆ ಹಬ್ಬ ತಂದು,
ಇದಿರು ನಿಂದಿರುವೆ ಇಂದು!
ಕನಸು ಮೂಡಿತೊ ಹೇಗೆ?
ನಾ ಕಣ್ಣು ಮುಚ್ಚಿದೆ ಹಾಗೆ.
ಕಣ್ಣು ತೆರೆದೆ ನಾ ಸುಮ್ಮನೆ,
ಅಚ್ಚರಿಯೇ ಕಣ್ಣೆದುರು ಗಮ್ಮನೆ!
ಮೇಘ ಮಲ್ಲೆಯನೇರಿಸಿ,
ಸೂರ್ಯ ತಿಲಕವ ಧರಿಸಿ,
ಬೆಳಕ ಸೀರೆಯನುಟ್ಟ ತರಳೆ,
ರಮಣಿ ನೀ ಯಾರು ಹೇಳೆ?
ರಾತ್ರಿ ಕಂಡಾ ರಮಣಿ ಆಗ,
ಹೇಳದೇ ಹೋದಳೆಲ್ಲಿಗೆ ಈಗ?
ಈಗ ಕಂಡ ಈ ಚೆಂದುಳ್ಳಿ ಚೆಲುವೆ,
ಬಂದಳೆಲ್ಲಿಂದ ಹೇಳು ಮನವೆ?
ಸುರಿಯುತಿದೆ ಸೋನೆ ಮುಂಗಾರು ಮಳೆಯು
ಹರಿವ ನದಿ ತುಂಬಿ ಬಂದು
ಭರದಲ್ಲಿ ಸಾಗುತಿದೆ ಸಾಗರದೆಡೆ
ಬೆರೆವ ಭರದಲ್ಲಿ ಹರಿದು
ಜೀಮೂತ ಜೀಕಿ ಸುರಿಸುತಿದೆ ಮಳೆಯ
ಆಮೋದ ತಾಕಿ ಧರೆಯ
ಕಾಮವೋ ಮುಗ್ಧ ಪ್ರೇಮವೋ ಕಾಣೆ
ಸೋಮರಸದಂಥ ಗೆಳೆಯ
ಹಸಿರುಕ್ಕಿ ನಲಿವ ಸಂತಸವು ಧರೆಗೆ
ಕಸವರದ ಬಿಸಿಲು ತಾನ
ಹೊಸೆಯುತಿದೆ ಗಾನ ಬೆಸೆಯುತ್ತ ತಾಳ
ಹೊಸತಾದ ಜೀವ ಗಾನ
ಬಿಸಿಬಿಸಿಯ ತಿನಿಸ ಬಯಸುತಿದೆ ಮನವು
ಬಿಸಿ ಪೇಯದೊಡನೆ ಜೊತೆಗೆ
ಮುಸಿನಗುತ ಮಡದಿ ತಿನಿಸುಗಳ ತಂದು
ಪಿಸುಮಾತ ನುಡಿಯೆ ಒಸಗೆ
ಪ್ರಕಾರ: ಅಂಶ ತ್ರಿಪದಿ
ರೂಪ: ಒಗಟು
ಮಾವಿನ ತಳಿರಿದೆ ಬೇವಿನ ಎಸಳಿದೆ
ಮಾವಿನ ಕಾಯಿ ಬೆಲ್ಲದ | ಸೊಗಡಿದೆ
ಯಾವುದು ಹೇಳು ಈ ಹಬ್ಬ? ||
ಪ್ರಕಾರ: ಮಾತ್ರಾಗಣ ತ್ರಿಪದಿ
ರೂಪ: ಒಗಟು
ನೀರಲ್ಲಿ ಹುಟ್ಟುವುದು ನೀರಲ್ಲಿ ಬೆಳೆಯುವುದು
ನೀರಲ್ಲಿ ಐಕ್ಯವಾಗುವುದು | ತಿಳಿದಿರಲು
ಯಾರಲ್ಲಿ ಹೇಳಿ ಉತ್ತರವ? ||
ಕಾಯುತಿಹಳು ಚೆಲುವ ಚೆನ್ನೆ,
ಹೂವ ಹಿಡಿದು ನಲ್ಲಗೆ.
ತನ್ನ ಇನಿಯನ ನೆನದು ಕೆನ್ನೆ,
ಕೆಂಪು ತಳೆಯಿತು ಮೆಲ್ಲಗೆ.
ಸಂಜೆ ಕೆಂಪಲಿ ಕೆನ್ನೆ ಕೆಂಪು,
ಮಿಳಿತವಾಯಿತು ಸುಮ್ಮನೆ.
ದಾರಿ ನೋಡುವ ಪೋರಿ ನಕ್ಕಳು,
ನೆನೆದು ಇನಿಯನ ವರ್ತನೆ.
ಬಣ್ಣ ಬಣ್ಣದ ದಿರುಸು ತೊಟ್ಟಳು,
ಕಂಡರೆದೆಯಲಿ ಓಕುಳಿ.
ಕಣ್ಗಳಿಂದಲೆ ಕಳಿಸಿಬಿಟ್ಟಳೆ?
ಮನವು ಮೆಚ್ಚುವ ಬಳುವಳಿ.
ಕುಸುಮ ಗುಚ್ಛವ ಹಿಡಿದು ಕೈಯಲಿ,
ಎದೆಯ ಹೂಗಳ ಜೊತೆಯಲಿ.
ಕಾದು ಕುಳಿತಳು ನಮ್ಮ ಮೈಥಿಲಿ,
ರಾಮ ಬರುವಾ ಪಥದಲಿ.
ನೀಲಕಂಠ ನಿಟಿಲಾಕ್ಷ ಪರಮಶಿವ ಗಿರಿಜೇಶ
ಫಾಲನೇತ್ರ ನಂಜುಂಡ ಗಣನಾಥ ಸರ್ವೇಶ
ನೀಲಲೋಹಿತ ರುದ್ರ ಮಾರಾರಿ ಭೂತೇಶ
ಕಾಲ ಹತ್ತಿರ ಇರುವೆ ನೀ ನೀಡು ಅವಕಾಶ
ವಿಷಮಾಕ್ಷ ಶಶಿಮೌಳಿ ಅವ್ಯಕ್ತ ಶಿತಿಕಂಠ
ವೃಷಧ್ವಜ ಭಗನೇತ್ರ ಫಾಲಾಕ್ಷ ವಿಷಕಂಠ
ವೃಷಭವಾಹನ ಶರ್ವ ಮೃಡ ರುದ್ರ ಶ್ರೀಕಂಠ
ವಿಷಧರನೆ ಪೂಜಿಸುವೆ ಕಲಿಸು ನೀ ಭವಪಾಠ
ಗಿರಿಧನ್ವ ಗೋಕರ್ಣವಾಸಿ ಹರ ಭೂತಪತಿ
ಪರಮಾತ್ಮ ತ್ರಿಪುರಾರಿ ಕಾಪಾಲಿ ದೇವಿಪತಿ
ಪುರವೈರಿ ಪರಮೇಶ ಈಶ ಕೈಲಾಸಪತಿ
ಕರಮುಗಿವೆ ಪೊಡಮಡುವೆ ನೀಡೆನಗೆ ಸ್ಥಿರಮುಕುತಿ
ಹೃದಯ ವೀಣೆಯ ಮೀಟಿ,
ಮಧುರ ರಾಗವ ನುಡಿಸು!
ಮಿಲನದಾಸೆಯ ನಾಟಿ,
ಎದೆಯ ನೋವನು ಮರೆಸು!
ಮರೆತು ಹೋದೆಯ ನೀನು?
ಜೊತೆಗೆ ಕಳೆದಾ ಸಮಯ!
ಸಾಕ್ಷಿ ಈ ಶಶಿ, ಬಾನು,
ಮಿಡಿವ ನನ್ನಾ ಹೃದಯ!
ಅಣುಕಿಸಿಹ ಶಶಿ ನನ್ನ,
ತೊಟ್ಟು ತಾರೆಯ ಮಾಲೆ!
ಬಾನು ನಗುತ ಕೇಳಿತೆನ್ನ,
ಬೇಕೆ ಮೇಘದ ಓಲೆ?
ನೀ ನುಡಿದ ಪಿಸುಮಾತು,
ಕಿವಿಯಲೇ ಗುನುಗುಟ್ಟಿದೆ!
ನಿನ ಕಣ್ಣ ಸವಿಮಾತು,
ಎದೆಯಲೇ ಮನೆ ಕಟ್ಟಿದೆ!
ನೀನು ಬರದಿರೆ ಈಗ,
ಮಿಡಿವುದೇ ಈ ಹೃದಯ?
ಬಂತಿದೋ ಬಹಬೇಗ,
ಕೊನೆಯ ಉಸಿರಿನ ಸಮಯ!



ಚುಟುಕು: ನಾಲ್ಕು ಸಾಲುಗಳ ಕವನ. ಅಂತ್ಯಪ್ರಾಸ ಕಡ್ಡಾಯ
ದತ್ತಪದ : ಬದಲಾವಣೆ
ಇರಬೇಕು ಸಹನೆ ತಪ್ಪಿಸಲು ಬಲು ಬವಣೆರಾಮ ರಾಮ ರಾಮ ಶ್ರೀ ರಾಮ ರಾಮ ರಾಮ
ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ
ರಾಮನ ನಾಮವೆ ತಾರಕ ಮಂತ್ರವು
ಕಾಮನೆಗಳನೇ ಸುಡುವಾ ಅನಲ
ತಾಮಸ ಕಾಯಕೆ ಚಲಿಸುವ ಬಲವ
ನಾಮದ ಮಾತ್ರದೆ ನೀಡುವ ಸಬಲ ||
ಮರಮರ ಎನ್ನುವ ರತ್ನಾಕರನಿಗೆ
ವರಗಳ ನೀಡಿದೆ ಕಾವ್ಯವ ರಚಿಸೆ
ಸರಯೂ ತೀರದ ಚೆಲುವಿನ ಪುತ್ತಿಗೆ
ಕರೆದರೆ ಬರುವೆಯ ಎನ್ನನು ಹರಸೆ ||
ಜನರನು ಕಾಡುವ ದೈತ್ಯರ ಕೊಂದವ
ಮನದಲಿ ಎನ್ನಯ ದೋಷವ ಕೊಲ್ಲು
ಹನುಮನ ಹೃದಯದಿ ನಿಂತಿಹೆ ರಾಘವ
ಕನಿಕರ ತೋರೋ ಎದೆಯಲಿ ನಿಲ್ಲು ||
ವಂದಿಪೆ ರಾಮನೆ ನಿನ್ನಯ ಪಾದಕೆ
ಬಂದಿಹೆ ನಮಿಸುತ ಕರುಣೆಯ ಬೇಡಿ
ಚಂದದಿ ಕರೆಯೋ ಆತ್ಮದ ಸನಿಹಕೆ
ಗಂಧದ ಹಾಗೆಯೆ ನನ್ನನು ತೀಡಿ ||
ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ
ರಾಮ ರಾಮ ರಾಮ ಶ್ರೀ ರಾಮ ರಾಮ ರಾಮ
ಆರ್ಯವೈಶ್ಯ ಸಾಹಿತ್ಯ ಪರಿಷತ್ತು,
ನಮಗು ಗೊತ್ತು, ನಿಮಗು ಗೊತ್ತು,ಎಲ್ಲರಿಗೂ ಗೊತ್ತು!
ಅಂಬೆಗಾಲ ಇಡುತ್ತಿದ್ದ ಈ ನಿಮ್ಮ ಪೋರ,
ಆಗಿಹನು ಹದಿಹರೆಯದ ಚಿತ್ತ ಚೋರ!
ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಗಮನವ ಸೆಳೆದವ,
ಚಿಗುರು ಮೀಸೆ ತೀಡುತ್ತ ನಗುನಗುತ ನಿಂತಿರುವ!
ಸಾಹಿತ್ಯ ಸಂಸ್ಕೃತಿಗೆ ನಮಿಸಿ ಹೆಜ್ಜೆ ಇಟ್ಟವ,
ಎಲೆಯ ಮರೆಯ ಕಾಯ್ಗಳಿಗೆ ಬೆಳಕನು ಕೊಟ್ಟವ!
ಉದಯಿಸುವ ಪ್ರತಿಭೆಗಳ ಕೈಯ ಹಿಡಿದವ,
ಬೆನ್ನ ತಟ್ಟಿ ಧೈರ್ಯ ತುಂಬಿ ಅಭಯವಿತ್ತವ!
ದಾನಿಗಳ ಕೊಡುಗೆಯಿಂದ ಶಕ್ತಿವಂತನು,
ಅವರ ನೆರವನೆಂದೂ ಮರೆತು ನಡೆಯನು!
ಸದಸ್ಯರು ಕೊಟ್ಟ ಹುರುಪು ರಕ್ಷೆಯಾಯಿತು,
ಕಾರ್ಯಕಾರಿ ಶ್ರಮದಿಂದ ಯಶವು ಬಂದಿತು!
ಸಾಧಿಸಲು ಕಲಿಯುಲು ಇನ್ನೂ ಇದೆ ಬಹಳ,
ಬೆಳೆಯುವನು ಬೆಳೆಸುವನು ದಾರಿ ಮಾಡಿ ಸರಳ!
ಹೀಗೆ ಇರಲಿ ಸದಾ ನಿಮ್ಮ ಪೋಷಿಸುವ ಪಾತ್ರ,
ಆಗುವನು ಜನಾಂಗಕೆ ಕಂಗಳ ನಕ್ಷತ್ರ!
ಕಾಣುತಿಹುದು ದೀಪ ಮಾಲೆ,
ಬೀದಿಯಲ್ಲಿ ಸಾಲು ಸಾಲೆ.
ಬೆಳಕ ಬೀರಿ ನಗುವ ಚಿಮ್ಮಿದೆ,
ದೀಪಾವಳಿಯ ಹುರುಪು ತಂದಿದೆ.
ಗಂಗಾ ಮಾತೆಯೆ ಶರಣು ಶರಣು
ನೀರ ತುಂಬುವೆ ಇಂದು ನಾನು
ಶುದ್ಧವಾಗಲಿ ಮಲಿನ ತನುವು
ಹಗುರವಾಗಲಿ ನೊಂದ ಮನವು
ಕೃಷ್ಣ ದೇವನೆ ನಿನಗೆ ನಮನ
ಆಗಲಿಂದೇ ಅಸುರ ದಮನ
ನರಕ ಚತುರ್ದಶಿಯ ಶುಭದಿನ
ನರಕಾಸುರರಿಗೆ ಕೊನೆ ದಿನ
ಕೇಳುತಿಹುದು ಗೆಜ್ಜ ನಾದ,
ನೋಡು ಅಲ್ಲಿ ದಿವ್ಯ ಪಾದ,
ಬಂದಳಗೋ ಲಕುಮಿ ತಾಯಿ,
ಸಲಹು ಎಮ್ಮನು ನೀನು ಮಾಯಿ.
ವಾಮನಮೂರ್ತಿ ನೀನು ಬಂದೆ
ಭೂಮ್ಯಾಕಾಶಗಳ ತುಳಿದು ನಿಂದೆ
ಬಲಿಗೆ ಮೋಕ್ಷವ ಬಳಿಗೆ ತಂದೆ
ಪಾಲಿಸು ಎಮ್ಮನು ನೀನೆ ತಂದೆ
ಬಕುತಿ ಭಾವಗಳು ಚಿಮ್ಮಿ ಓಕುಳಿ
ಹರುಷದಾ ದೀಪಾವಳಿ
ದೀಪಗಳ ಸಿರಿ ಬೆಳಕಲಿ
ವಿಶ್ವ ಶಾಂತಿಯು ಹರಡಲಿ
ನೀಡಿ ಬೆಳಕಿನ ಎರವಲು
ದೀಪವಾಗಿಸು ಎನ್ನನು.
ದೀಪಾವಳಿಗಳ ಮಾಲೆಯಲ್ಲಿ,
ಚೆಂದ ಪೋಣಿಸು ಎನ್ನನು.
ಜಗಕೆ ಮಿಣುಕು ಬೆಳಕನಿತ್ತು
ಕುಣಿವೆ ನಿನ್ನ ಹೆಸರಲಿ.
ಕೆರೆಯ ನೀರನು ಕೆರೆಗೆ ಚೆಲ್ಲಿದ,
ಧನ್ಯ ಭಾವವು ನನ್ನದಿರಲಿ.
ಮನದ ತಮವು ಕರಗಲಿ,
ಜಡತೆ ಮಾಯವಾಗಲಿ.
ಜಗದ ನೋವು ನೀಗಲಿ,
ಹೊಸ ಬೆಳಕಿನಾ ಬೆಳಕಲಿ.
ಕುಡುಕನಿಗೆ ಮತ್ತಿನಲೇ ಆನಂದ
ಕಾಮುಕಗೆ ದೇಹಸುಖವೇ ಆನಂದ
ಬಕುತನಿಗೆ ಸನ್ನಿಧಿಯೇ ಆನಂದ
ಆನಂದವಿರುವಾಗ ಮತ್ತೇನು ಬೇಕೆಂದ!
ಕತ್ತೆಗೆ ಪಾಳುಗೋಡೆಯೇ ಚೆಂದ
ಅರಸನಿಗೆ ಅರೆಮನೆಯೇ ಅಂದ
ಬಡವಗೆ ಹಟ್ಟಿಯಲೇ ಆನಂದ
ಮೀನು ಅಟ್ಟುವವಗೆ ಇಲ್ಲ ದುರ್ಗಂಧ!
ಹಕ್ಕಿಗೆ ನೀರಿನಲಿ ಗೂಡಿಲ್ಲ
ಮೀನಿಗೆ ಬಾನಿನಲಿ ಎಡೆಯಿಲ್ಲ
ಚತುಷ್ಪಾದಕೆ ನೆಲವೇ ಎಲ್ಲ
ಮನುಜ ಮಾತ್ರ ಎಲ್ಲಿಯೂ ಸಲ್ಲ!
ಮತ್ತು ಬೇಕೆನುವವಗೆ ಮದ್ದೇ ಹಾಸ,
ಹಿತವಚನ ಕಿವಿಗೆ ಕಾದ ಸೀಸ
ಕಾಣಿಸದೇ ಇಲ್ಲಿ ಮತ್ತಿನ ಮೋಸ?
ಕಾಪಾಡಬೇಕಿದೆ ನಮ್ಮೆಲ್ಲರ ಕೂಸ!
ಜೋಡಿ ಜೀವದ ದೂರದ ಪಯಣ
ವಿರಮಿಸಲಿಲ್ಲ ಒಂದು ಕ್ಷಣ
ಭಾರವ ಹೊತ್ತು ಬಾಗಿದೆ ಬೆನ್ನು
ಪ್ರೀತಿಯ ಪೊರೆಗೆ ಮಂಜಾಗಿದೆ ಕಣ್ಣು
ಸೂತ್ರವು ಹರಿದಿದೆ ಗಾಳಿಪಟಕೆ,
ಏಳುತ ಬೀಳುತ ಸೇರುವುದೆಲ್ಲಿಗೆ?
ಹಗಲಲೇ ಕಾಡಿದೆ ಇರುಳಿನ ಕುರುಡು
ಮಕ್ಕಳು ಇದ್ದರೂ ಬಾಳೇ ಬರಡು.
ನಿಮ್ಮಯ ನೆರಳಲಿ ಬೆಳೆದ ಸಸಿಗಳು
ಆದವು ಬೇಗನೆ ನೆರಳಿನ ಮರಗಳು
ದೂಡಿವೆ ನಿಮ್ಮನೇ ಬಿಸಿಲಿನ ಝಳಕೆ
ಕರುಣೆಯೇ ಇಲ್ಲವೇ ಇಂದಿನ ಜನಕೆ